ಬಸವಣ್ಣ   
  ವಚನ - 793     
 
ಉರಿ ತಾಗಿದ ಮೃಗವು ಒಂದಡಿಯನಿಡುವುದೆ, ಅಯ್ಯಾ? ತನುವ ತಾಗಿದ ಸುಖವ ಅಗಲುವುದೆ? ಕೂಡಲಸಂಗನ ಶರಣರ ಅನುಭಾವವರಿದವರ ಮರಳಿ ಮರ್ತ್ಯರೆನ್ನಬಹುದೆ?