ಬಸವಣ್ಣ   
  ವಚನ - 794     
 
ನಿಮ್ಮ ಶ್ರೀಪಾದವ ಮುಟ್ಟಿ ಎನ್ನ ಕರ್ಮ ಹರಿಯಿತ್ತು. ನಿಮ್ಮ ಪ್ರಸಾದದಿಂದ ನಾನು ಭವಗೆಟ್ಟೆ , ನೋಡಯ್ಯಾ ! ಮನ ಪರುಷ, ದೃಷ್ಟಿ ಪರುಷ, ಭಾವ ಪರುಷ: ಲಿಂಗಗಣಂಗಳು. ಕೂಡಲಸಂಗಮದೇವಾ, ನಿಮ್ಮ ಶರಣರನುಭಾವದಿಂದ ನಾನು ಸುಖಿಯಾದೆನು!