Music Courtesy: Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 541
Hindi Translationप्राणलिंग का प्रतिग्रह करने के पश्चात्
लिंग रहित होकर कैसे चल सकते हो?
लिंग रहित होकर कैसे बोल सकते हो?
लिंग रहित होकर पंचेंद्रिय-सुख नहीं भोगना चाहिए;
लिंग रहित होकर थूक नहीं निगलना चाहिए;
यों है कूडलसंगमदेव का वचन॥
Translated by: Banakara K Gowdappa
English Translation Once you are wedded to Prāṇaliṅga
How can you lead a life
Apart from Liṅga ?
How can you speak
Apart from Liṅga?
You cannot taste
The joy of the fivefold sense
Apart from Liṅga
You cannot swallow even your spit
Apart from Liṅga
Thus says Kūḍala Saṅga's word.Translated by: L M A Menezes, S M Angadi
Tamil Translationபிராணலிங்கித்தலம்
பிராணலிங்கத்தை உணர்ந்த பிறகு
இலிங்கமற்று நடக்கும் முறை என்னவோ?
இலிங்கமற்று மொழியும் முறை என்னவோ
ஐம்புலன் இன்பங்களை இலிங்கமற்று
துய்க்கவியலாது. இலிங்கமற்று
கவளத்தையும் விழுங்கவியலாது என
கூடல சங்கனின் வசனம் இயம்புகிறது.
Translated by: Smt. Kalyani Venkataraman, Chennai
ಶಬ್ದಾರ್ಥಗಳು Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 638
ಕನ್ನಡ ವ್ಯಾಖ್ಯಾನ(ಕೈಹಿಡಿದ) ಪ್ರಿಯೆಯನ್ನು ಪ್ರೀತಿಸಿದಂತೆಲ್ಲ ಆ ಪ್ರಿಯೆ ಪ್ರಾಣಪ್ರಿಯೆಯಾಗುವಂತೆ, ಇಷ್ಟಲಿಂಗವನ್ನು ಭಕ್ತಿಯಿಂದ ಉಪಾಸಿಸಿದಂತೆಲ್ಲ -ಸ್ಥೂಲಶರೀರದ ಮೇಲೆ ಪ್ರತಿಷ್ಠಿತವಾಗಿರುವ ಆ ಇಷ್ಟಲಿಂಗವು ಸೂಕ್ಷ್ಮಶರೀರದಾಳದಲ್ಲಿ ಪ್ರಾಣಲಿಂಗವಾಗಿ ಸುಪ್ರತಿಷ್ಠಿತವಾಗುವುದು. ಅಂದರೆ ದೇಹ-ಮನಗಳ ಸೂತ್ರಹಿಡಿದು ಭಕ್ತನು ತನ್ನ ಇರವಿನ ಪ್ರಾಣಮಯದವರೆಗೂ ಲಿಂಗಪರಿಣಾಮಿಯಾಗುವನು. ಆಗ ಅವನು ಏನನ್ನು ಯೋಚಿಸಿದರೂ ಏನನ್ನು ಕಂಡರೂ ಏನನ್ನು ಮಾತನಾಡಿದರೂ ಏನನ್ನು ಮಾಡಿದರೂ –ಅದೆಲ್ಲವೂ ಲಿಂಗಸಾಕ್ಷಿಯಲ್ಲೇ ಲಿಂಗ ಗಂಭೀರದಿಂದಲೇ ನಡೆಯುವುದು.
“ಲಿಂಗವಿರಹಿತವಾಗಿ ಯಾವ ಸುಖವನ್ನೂ ಉಣ್ಣಬಾರದು, ಲಿಂಗವಿರಹಿತವಾಗಿ ಎಂಜಲನ್ನೂ ನುಂಗಬಾರದು” ಎಂಬ ಶಿವಾಗಮವಾಕ್ಯವು (ಪ್ರಾಣಲಿಂಗಿಯಾದ) ಆ ಭಕ್ತನಿಗೆ ಒಂದು ನೀತಿನಿಯಮವಾಗಿರದೆ ನೈಜವೇ ಆಗುವುದು.
ವಿ: (1) ಗುರುವು ದೀಕ್ಷೆಮಾಡುವಾಗ ತನ್ನ ಹಸ್ತವನ್ನು ಶಿಷ್ಯನ ತಲೆಯ ಮೇಲಿಡುವನು –ಅದು ವೇದದೀಕ್ಷೆ. ಕಿವಿಯಲ್ಲಿ ಪಂಚಾಕ್ಷರಿಯನ್ನು ಉಸುರುವನು –ಅದು ಮಂತ್ರದೀಕ್ಷೆ, ಕೈಗೆ ಲಿಂಗವನ್ನು ಕೊಡುವನು ಅದು ಕ್ರಿಯಾದೀಕ್ಷೆ.
(2) ಶಿವತತ್ತ್ವ ಚಿಂತಾಮಣಿಯ ಈ ಮುಂದಿನ ವಿವರವನ್ನು ಸಾಂದರ್ಭಿಕವಾಗಿ ಗಮನಿಸಬಹುದು : ಗುರುವು ಶಿಷ್ಯನ ಯೋಗಾಂಗ(ಕಾರಣಶರೀರ)ದಲ್ಲಿ ವೇದದೀಕ್ಷೆಯಿಂದ ಭಾವಲಿಂಗವನ್ನೂ, ಭೋಗಾಂಗ(ಸೂಕ್ಷ್ಮ ಶರೀರ)ದಲ್ಲಿ ಮಂತ್ರದೀಕ್ಷೆಯಿಂದ ಪ್ರಾಣಲಿಂಗವನ್ನೂ, ತ್ಯಾಗಾಂಗ(ಸ್ಥೂಲಶರೀರ)ದಲ್ಲಿ ಕ್ರಿಯಾದೀಕ್ಷೆಯಿಂದ ಇಷ್ಟಲಿಂಗವನ್ನೂ ಸ್ಥಾಪಿಸುವನು. ಯೋಗಾಂಗವು ಆತ್ಮಾಂಗವಾಗಿ ಕಾರಣ ಶರೀರವೆನಿಸುವುದು,ಭೋಗಾಂಗವು ಆಂತರ್ಯವಾದುದಾಗಿ ಸುಕ್ಷ್ಮಶರೀರವೆನಿಸುವುದು ತ್ಯಾಗಾಂಗವು ಬಹಿರಂಗವಾದುದಾಗಿ ಸ್ಥೂಲಶರೀರವೆನಿಸುವುದು. ಆತ್ಮ(ಭಕ್ತ)ನು ಯೋಗಾಂಗದಲ್ಲಿ ಪ್ರಾಜ್ಞಜೀವನಾಗಿ, ಸುಷುಪ್ತ್ಯವಸ್ಥೆಯಲ್ಲಿ ಭಾವಲಿಂಗವನ್ನೂ, ಭೋಗಾಂಗದಲ್ಲಿ ತೈಜಸಜೀವನಾಗಿ ಸ್ವಪ್ನಾವಸ್ಥೆಯಲ್ಲಿ ಪ್ರಾಣಲಿಂಗವನ್ನೂ, ತ್ಯಾಗಾಂಗದಲ್ಲಿ ವಿಶ್ವಜೀವನಾಗಿ ಜಾಗ್ರದವಸ್ಥೆಯಲ್ಲಿ ಇಷ್ಟಲಿಂಗವನ್ನೂ ಪೂಜೆಮಾಡುತ್ತಿರುವನು. ಹೀಗೆ ಭಕ್ತನ ಆತ್ಮವು ಅವಸ್ಥಾಭೇದದಿಂದ ಲಿಂಗತ್ರಯವನ್ನು ಉಪಾಸನೆ ಮಾಡುತ್ತಿರುವುದು. ಆ ಮಾಡುವ ಉಪಾಸನೆಯೇ ಸಂಯೋಗ, ಸಂಯೋಗವೆಂದರೆ ಲಿಂಗಾಂಗಸಂಯೋಗ, ಲಿಂಗಾಂಗಸಂಯೋಗವೇ ದ್ವೈತಭಾವಲಯ, ದ್ವೈತಭಾವಲಯವೇ ನಿವೃತ್ತಿ, ನಿವೃತ್ತಿಯೇ ವಿಶ್ರಾಂತಿ, ವಿಶ್ರಾಂತಿಯೇ ಪರಮಪದ. ಈ ಲಿಂಗಾಂಗ ಸಂಯೋಗ ವಿಧಿಯನ್ನು ಆತ್ಮನು ತಿಳಿದರೆ ಅವನಲ್ಲಿ ಬೀಜರೂಪದಲ್ಲಿರುವ ಪರಾಶಕ್ತಿಯು ಆಂಕುರಿಸಿ ಎಲ್ಲೆಡೆ ಆವರಿಸುವುದು (ಸಂಧಿ. 51)
(3) ಆದ್ಯಂತರಹಿತವಾದ ಪರಬ್ರಹ್ಮವೇ ಲಿಂಗಸ್ಥಲ. ಆ ಲಿಂಗಮೂರ್ತಿಯ ನಿಜದಲ್ಲಿ ಲೀನವಾಗುವೆನೆಂಬ ಅತಿಭಕ್ತಿಯ ಆತ್ಮತತ್ತ್ವವೇ ಅಂಗಸ್ಥಲ. ಈ ಅಂಗಸ್ಥಲ ಮೂರು ವಿಧ : ಯೋಗಾಂಗ-ಭೋಗಾಂಗ-ತ್ಯಾಗಾಂಗ. ಶಿವಯೋಗವನ್ನು ಹಿಂಗದಿರುವುದೇ ಯೋಗಾಂಗ, ಶಿವಸಹಿತವಾಗಿ ಭೋಗಗಳನ್ನು ಭೋಗಿಸುವುದೇ ಭೋಗಾಂಗ, ಸಂಸೃತಿ(ಸಂಸಾರ)ದ ಸಂಗವನ್ನು ತ್ಯಜಿಸುವುದೇ ತ್ಯಾಗಂಗ. ಈ ಯೋಗಾಂಗ-ಭೋಗಾಂಗ-ತ್ಯಾಗಾಂಗಗಳು ಕ್ರಮವಾಗಿ ಕಾರಣಶರೀರ, ಸೂಕ್ಷ್ಮಶರೀರ, ಸ್ಥೂಲಶರೀರ ಎಂದೂ ಕರೆಯಲ್ಪಡುವವು (ಶಿವತತ್ತ್ವ ಚಿಂತಾಮಣಿ, ಸಂಧಿ 50)
(4) ಶಿವಾಗಮಗಳು ಚರ್ಯಾ-ಕ್ರಿಯಾ-ಯೋಗ-ಜ್ಞಾನವೆಂಬ ನಾಲ್ಕು ಪಾದ(ವಿಭಾಗ)ಗಳಲ್ಲಿ ಶಿವಭಕ್ತನ ಸಾಧನೆ-ಸಿದ್ಧಿಗಳೆರಡನ್ನೂ ವಿವರಿಸುವವು. ಯಾವನಾದರೊಬ್ಬನು ಶಿವಭಕ್ತನಾಗಲು ಲಿಂಗದೀಕ್ಷಾದಿ ವಿಧಿಗಳಿಗೆ ಒಳಗಾಗುವ ವಿವರವನ್ನು ಕ್ರಿಯಾಪಾದದಲ್ಲಿಯೂ, ಅನುಷ್ಠಿಸಬೇಕಾದ ಪೂಜಾದಿಗಳನ್ನು ಕ್ರಿಯಾಪಾದದಲ್ಲಿಯೂ ಮಾಡಬೇಕಾದ ಶಿವಯೋಗಾದಿಗಳನ್ನು ಯೋಗಪಾದದಲ್ಲಿಯೂ, ಪಡೆಯಬೇಕಾದ ಜ್ಞಾನೋತ್ಕರ್ಷವಿವರವನ್ನು ಜ್ಞಾನಪಾದದಲ್ಲಿಯೂ ಹೇಳಲಾಗಿದೆ. ಪ್ರಸ್ತುತ ಬಸವಣ್ಣನವರ ವಚನಗಳನ್ನು ಜೋಡಿಸಿರುವ ಷಟ್ಸ್ಥಲಗಳ ಪರಿವಿಡಿಯಲ್ಲಿ-ಭಕ್ತ ಮಾಹೇಶ್ವರ ಮತ್ತು ಪ್ರಸಾದಿಸ್ಥಲಗಳು ಕ್ರಿಯಾ ಮತ್ತು ಚರ್ಯಾಪಾದಗಳನ್ನೂ, ಪ್ರಾಣಲಿಂಗಿಸ್ಥಲವು ಯೋಗಪಾದವನ್ನೂ, ಶರಣ ಮತ್ತು ಐಕ್ಯಸ್ಥಲಗಳು ಜ್ಞಾನಪಾದವನ್ನೂ ಪ್ರತಿನಿಧಿಸುವವೆಂಬುದನ್ನು ಗಮನಿಸಬೇಕು.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.