ಬಸವಣ್ಣ   
  ವಚನ - 798     
 
ಹತ್ತುಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು, ಮುಟ್ಟುವ ತೆರನನರಿಯದನ್ನಕ್ಕ? ಕಟ್ಟಿದರೇನು, ಬಿಟ್ಟರೇನು ಮನವು ಲಿಂಗದಲ್ಲಿ ಮುಟ್ಟದನ್ನಕ್ಕ? ಮಾತಿನ ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆಹೆನೆಂಬ ಪಾತಕರ ಮೆಚ್ಚ, ನಮ್ಮ ಕೂಡಲಸಂಗಮದೇವ.