ಬಸವಣ್ಣ   
  ವಚನ - 800     
 
ಗುರು ತೋರಿದ ಲಿಂಗವು ಮನಸ್ಥಲವಾಗಿರಲು ಪವನಭೇದದಿಂದ ಅರಿದಹೆನೆಂದರೆ, ಅದೇ ದ್ರೋಹ! ಇಡಾ ಪಿಂಗಳಾ ಸುಷುಮ್ನಾನಾಳವಿಡಿದು ಅರಿದಹೆನೆಂದರೆ ಕೂಡಲಸಂಗಮದೇವ ಮೂಗ ಕೊಯ್ಯದೆ ಮಾಣ್ಬನೆ?