ಬಸವಣ್ಣ   
  ವಚನ - 804     
 
ಮನದ ಕೊನೆಯ ಮೊನೆಯ ಮೇಲೆ ಮನೆಯ ಮಾಡಿಕೊಂಡಿಪ್ಪನೊಬ್ಬ ದಾಸೋಹಿ. ಆದಿವಿಡಿದು ಬಂದಾತನೆ ಭಕ್ತ: ಅನಾದಿವಿಡಿದು ಬಂದಾತನೆ ಜಂಗಮ! ಆದಿ ಗುರು: ಅನಾದಿ ಶಿಷ್ಯ! ಈ ಉಭಯ ಕುಳಸ್ಥಳವ ಬಲ್ಲರೆ ಆತ ಲಿಂಗಸಂಬಂಧಿ, ಕೂಡಲಸಂಗಮದೇವಾ.