ಬಸವಣ್ಣ   
  ವಚನ - 805     
 
ಅರಿದರಿದು! ಸಮಗಾಣಿಸಬಾರದು: ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ ಈಶ್ವರನೊಡೆಯಿಕ್ಕದೆ ಮಾಣುವನೆ? ಪಾತ್ರ ಅಪಾತ್ರವೆಂದು ಕಂಡರೆ ಶಿವನೆಂತು ಮೆಚ್ಚುವನು? ಜೀವ ಜೀವಾತ್ಮವ ಸರಿಯೆಂದು ಕಂಡರೆ ಸಮವೇದಿಸದಿಪ್ಪನೆ ಶಿವನು? ತನ್ನ ಮನದಲ್ಲಿ `ಯತ್ರ ಜೀವ ಸ್ತತ್ರ ಶಿವ'ನೆಂದು ಸರ್ವಜೀವದಯಾಪಾರಿಯಾದಲ್ಲಿ, ಕೂಡಲಸಂಗಮದೇವನು ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ?