ಬಸವಣ್ಣ   
  ವಚನ - 807     
 
ಮುತ್ತು ಉದಕದಲಾಗದು, ಉದಕ ಮುತ್ತಿನಲಾಗದು: ತತ್ತ್ವ ಘಟಿಸಿದ ಸುಮುಹೂರ್ತದಲ್ಲಲ್ಲದೆ, ಚಿತ್ತವೇದ್ಯವಾಗದು, ಸದ್ಗುರುವಿನ ಕರುಣಕ್ಕಲ್ಲದೆ. ಕರ್ತೃ ಕೂಡಲಸಂಗಮದೇವರ ಒಲವಿನ ದಯದ ಚಿತ್ತವಿಡಿದಂಗಲ್ಲದೆ, ಶಿವತತ್ತ್ವ ಸಾಹಿತ್ಯವಾಗದು.