ಬಸವಣ್ಣ   
  ವಚನ - 808     
 
ಕಾಯದ ಗಡಣೆ ಕೆಲಬರಿಗುಂಟು, ಜೀವದ ಗಡಣೆ ಕೆಲಬರಿಗುಂಟು, ಭಾವದ ಗಡಣೆ ಕೆಲಬರಿಗುಂಟು, ವಚನದ ಗಡಣೆ ಕೆಲಬರಿಗುಂಟು: ಪ್ರಾಣಲಿಂಗದ ಗಡಣೆ ಆರಿಗೂ ಇಲ್ಲ, ಕೂಡಲಸಂಗನ ಶರಣರಲ್ಲಿ, ತಂಗಟೂರ ಮಾರಯ್ಯಂಗಲ್ಲದೆ.