Hindi Translationपृथ्वी, आपः, तेज, वायु, आकाश से अलिप्त देव,
प्रणव स्वरूपी के सिवा
तव महिमा कोई देख नहीं पाते ।
ज्ञान-ज्योति के ध्यान से नालशुद्ध द्वार बनकर
आराधना करते मम कूडलसंगमदेव को देखा॥
Translated by: Banakara K Gowdappa
English Translation God undefiled
By earth, fire, water, ether, air,
None can perceive Thy glory but
Those who are embodiments, of the word 'Prāṇava'.
Being the channel's unstained door,
Through meditation on
The light of Knowledge, and through worship done,
I have attained
Lord Kūḍala Saṅgama.
Translated by: L M A Menezes, S M Angadi
Tamil Translationநிலம், நீர், தீ, வாயு, ஆகாய, தூய இறைவனே
உம் மகிமையைப் பிரணவ வடிவினனன்றி
வேறு எவராலும் அறியவியலாது ஐயனே.
ஞான ஒளி தியானத்தால் அடைப்பட்ட தூய
நாளத்தால் ஆராதித்துக் கண்டேன்நம்
கூடல சங்கம தேவனை.
Translated by: Smt. Kalyani Venkataraman, Chennai
Telugu Translationపృథివ్య ప్తేజో వాయురాకాశములు;
నిరంజన దేవా, నీ మహిమప్రణవ స్వరూపునికి తప్ప
నిక యెవ్వరికీ తెలియ రాదయ్య;
జ్ఞాన జ్యోతి ధ్యానముచే
నాళశుద్ధ ద్వారమునబడి
అర్చించి చూచితి మా కూడల సంగమ దేవుని !
Translated by: Dr. Badala Ramaiah
ಶಬ್ದಾರ್ಥಗಳು Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 638
ಕನ್ನಡ ವ್ಯಾಖ್ಯಾನನಾವು ತಿಂದ ಅನ್ನರಸ ಸಪ್ತಧಾತುಗಳಾಗಿ ಪರಿವರ್ತನೆಗೊಂಡು –ಮಿಕ್ಕಿದ್ದು ವೀರ್ಯವಾಗುವುದೆಂದೂ, ಆ ವೀರ್ಯವು ಗುದಪ್ರದೇಶದ ಆಧಾರಚಕ್ರದಡಿಯಲ್ಲಿ ಸಂಗ್ರಹವಾಗಿದ್ದು –ರತಿಸಂಭೋಗದಲ್ಲಿ ಮತ್ತಿತರ ನಿತ್ಯವ್ಯವಹಾರಗಳಲ್ಲಿ ವ್ಯಯವಾಗುವುದೆಂದೂ–ಆ ವೀರ್ಯಶಕ್ತಿಯನ್ನು ಹಾಗೆ ಅಪವ್ಯಯ ಮಾಡದೆ – ಮೂಲಾಧಾರ ಚಕ್ರದೆಡೆಯೇ ಮುಚ್ಚಿಕೊಂಡಿರುವ ಸುಷುಮ್ನಾ ಎಂಬ ನಾಡಿಯ ದ್ವಾರವನ್ನು ತೆರವು ಮಾಡಿ ಆ ಮೂಲಕ (ಆ ವೀರ್ಯಶಕ್ತಿಯನ್ನು) ಉನ್ಮುಖವಾಗಿ ಹರಿಯಬಿಟ್ಟರೆ ಅದು ಕುಂಡಲಿನೀ(ಪ್ರಾಣ)ಶಕ್ತಿಯಾಗಿ –ಗುದ ಮತ್ತು ಶಿಶ್ನಸ್ಥಾನಗಳಲ್ಲಿರುವ ಆಧಾರ ಮತ್ತು ಸ್ವಾಧಿಷ್ಠಾನವೆಂಬ, ನಾಭಿ ಮತ್ತು ಹೃದಯ ಸ್ಥಾನಗಳಲ್ಲಿರುವ ಮಣಿಪೂರಕ ಮತ್ತು ಅನಾಹತವೆಂಬ, ತಾಲು ಮತ್ತು ಭ್ರೂಮಧ್ಯಸ್ಥಾನಗಳಲ್ಲಿರುವ ವಿಶುದ್ಧ ಮತ್ತು ಆಜ್ಞೇಯವೆಂಬ ಚಕ್ರಗಳೊಳಗಿಂದ ನುಗ್ಗಿ ನೆತ್ತಿಯ ಸ್ಥಾನದಲ್ಲಿರುವ ಸಹಸ್ರಾರವೆಂಬ ಚಕ್ರವನ್ನು ತಲುಪುವುದು. ಆಗ ಜೀವನು ಸಂಸಾರ ಶೃಂಖಲೆಯಿಂದ ಬಿಡಿಸಿಕೊಂಡು ಸರ್ವಜ್ಞನೂ ಸರ್ವಶಕ್ತನೂ ಸರ್ವ ವ್ಯಾಪಿಯೂ ಆಗಿ ಕೇವಲ ಸಚ್ಚಿದಾನಂದಸ್ವರೂಪಿಯೇ ಆಗುವನೆಂಬುದು ಯೋಗಿಗಳ ಮಾತು.
ಈ ನಿರಂಜನ ಸ್ಥಿತಿಯನ್ನು ತಲುಪಲು ಪ್ರಾಥಮಿಕವಾಗಿ ಇಡಾ –ಪಿಂಡಗಳೆಂಬ ಎರಡು ನಾಡಿಗಳಲ್ಲಿ ಸೋರಿಹೋಗುತ್ತಿರುವ ಪ್ರಾಣಶಕ್ತಿಯನ್ನು ಬೆನ್ನುಹುರಿಯ ನಡುವಿರುವ ಸುಷುಮ್ನಾನಾಡಿಯ ಮೂಲಕ ಉನ್ಮುಖವಾಗಿ ಹರಿಯ ಬಿಡುವ ಸಿದ್ಧತೆಯನ್ನೇ “ನಾಳಶುದ್ಧದ್ವಾರನಾಗಿ” ಎಂಬ ಮಾತಿನಿಂದ ಬಸವಣ್ಣನವರು ಸೂಚಿಸುತ್ತಿರುವರು.
ಮತ್ತು ವಚನದಲ್ಲಿರುವ ಪೃಥ್ವಿ-ಅಪ್ಪು-ತೇಜ-ವಾಯು-ಆಕಾಶವೆಂಬ ಪಂಚಭೂತವಾಚೀ ಪದಗಳನ್ನು ಕೆಳಗಿಂದ ಮೇಲಕ್ಕೆ –ಕ್ರಮವಾಗಿ ಆಧಾರ-ಸ್ವಾಧಿಷ್ಠಾನ –ಮಣಿಪೂರಕ –ಅನಾಹತ –ವಿಶುದ್ಧವೆಂಬ ಪಂಚಕ್ರಗಳಿಗೂ, ನಿರಂಜನವೆಂಬ ಪದವನ್ನು ಸಹಸ್ರಾರದ ನೆರೆಹೊರೆಯ ಭ್ರೂಮಧ್ಯಸ್ಥಾನದ ಆಜ್ಞಾಚಕ್ರಕ್ಕೂ ಪ್ರಾತಿನಿಧಿಕವಾಗಿ ಬಳಸಲಾಗಿದೆ.
ಹೀಗೆ ಆಧಾರದಿಂದ ಹಿಡಿದು ಸಹಸ್ರಾರದವರೆಗಿನ ಪ್ರಾಣಶಕ್ತಿಯ ದಿವ್ಯಸಂಚಾರವನ್ನು -ಶರಣರು ಶಕ್ತಿಯಿಂದ ಭಕ್ತಿಗೂ, ಭಕ್ತಿಯಿಂದ ಮುಕ್ತಿಗೂ ಸಲ್ಲುವ ಭಕ್ತಿಯೋಗದೊಡನೆ ಸಮೀಕರಿಸಿರುವರು : “ಶಕ್ತಿಯೆಡೆ ಗುದ-ಲಿಂಗ, ಅಂತಾ | ಭಕ್ತಿಯೆಡೆಯಾ ನಾಭಿ - ಹೃದಯವು | ಮುಕ್ತಿಯೆಡೆಯಾ ಹುಬ್ಬುಗಳದು ನಿಮಿತ್ತದಲಿ | ಶಕ್ತಿಯಲಿ ಸಂಪನ್ನನಾಗಿಯೆ | ಭಕ್ತಿಯಲಿ ಭಾವಜ್ಞನಾದೊಡೆ | ಮುಕ್ತಿಯೆಂಬುದು ಮುಂದೆ ನಿಲುವುದು” ಎಂದು ಹೇಳಲಾಗಿದೆ (ಪ್ರ.ಲಿಂ.ಲೀಲೆ 17-30)
ಶರಣಧರ್ಮದ ಪರಿಭಾಷೆಯಲ್ಲಿ ಭಕ್ತನಾಗುವುದೆಂದರೂ, ಪಾತಂಜಲಯೋಗ ಪರಿಭಾಷೆಯಲ್ಲಿ ಯೋಗಿಯಾಗುವುದೆಂದರೂ ಆತ್ಯಂತಿಕವಾಗಿ ಒಂದೇ ಆಗಿದೆ : “ಬಿಂದುವಸ್ತುವ ಗುರು(ಆಧಾರಸ್ವಾಧಿಷ್ಠಾನ) ಮುಖಾಗ್ನಿಗೆ ತಂದು ಪಚನಿಸಿ, ಜಂಗಮ(ಮಣಿಪೂರಕ ಅನಾಹತ)ದ ಮುಖದಿಂದ ಲಿಂಗ(ವಿಶುದ್ಧ ಆಜ್ಞೇಯ)ಕೆ ನೀಡಿ, ತನ್ಮುಖದಿಂದಲೊಕ್ಕುಳಿದ | ಸಂದ ಸುಧೆಯೆನಿಪಾ ಪ್ರಸಾದವ | ನೊಂದು ಮನಸಿನಲುಂಡು ಪರಮಾ | ನಂದವನು ಪಡೆದವನೆ ಭಕ್ತನು” (ಅದೇ 7-27).
ಪ್ರಾಣಾಯಾಮಾದಿಗಳಿಂದ ಹೇಗೋ ಹಾಗೆ –ತೀವ್ರ ಭಕ್ತಿಭಾವನೆಯಿಂದಲೂ, (ಅಷ್ಟೇ ಏಕೆ ನಿರ್ಭರ ಪ್ರೇಮ ಭಾವನೆಯಿಂದಲೂ) ಸುಷುಮ್ನೆಯ ದ್ವಾರ ತೆರೆದುಕೊಳ್ಳುವುದೆಂದು ಅನುಭಾವಿಗಳು ಅಭಿಪ್ರಾಯಪಡುವರು.
ಹೀಗೆ ತೆರೆದುಕೊಂಡ ಸುಷುಮ್ನಾನಾಡಿಯೆಂಬ ಗುಹಾದ್ವಾರದುದ್ದಕ್ಕೂ ಪೇರಿಸಿರುವ ಷಟ್ಚಕ್ರಗಳನ್ನು ಭೇದಿಸಿಕೊಂಡು ಪಯಣಿಸಿ ಸಹಸ್ರಾರದ ಶಿಖರದಲ್ಲಿ ಜ್ಞಾನಜ್ಯೋತಿಯ ಬೆಳಗಿನಲ್ಲಿ ಕೂಡಲ ಸಂಗಮ ದೇವನನ್ನು ಕಂಡಂತೆ ಬಸವಣ್ಣನವರು ಈ ವಚನದಲ್ಲಿ ವರ್ಣಿಸಿರುವರು –ಉಚಿತ ಸಂಕೇತ ಭಾಷೆಯಲ್ಲಿ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.