ಬಸವಣ್ಣ   
  ವಚನ - 822     
 
ಅಷ್ಟದಳ ಕಮಳಾತ್ಮದೊಳಗೆ ನೆಟ್ಟನೆ ಮನಃಪ್ರೇರಕನೆಂದು ನಿಮ್ಮ ನಂಬಿದೆ, ಮತ್ತೊಂದನರಿಯೆ. ನಿತ್ಯ ಸ್ವತಂತ್ರನು ನೀನೇ ದೃಷ್ಟ: ಲಿಂಗ ಜಂಗಮ ಒಂದೆ ಎಂದಿಪ್ಪೆನು, ಪರಮ ಪ್ರಭುವೆ, ಕೂಡಲಸಂಗಮದೇವಾ.