ಬಸವಣ್ಣ   
  ವಚನ - 824     
 
ಗುರು ಮುನಿದರೆ ಒಂದು ದಿನ ತಾಳುವೆ, ಲಿಂಗ ಮುನಿದರೆ ದಿನವರೆ ತಾಳುವೆ. ಜಂಗಮ ಮುನಿದರೆ ಕ್ಷಣಮಾತ್ರ ತಾಳಿದೆನಾದರೆ, ಎನ್ನ ಪ್ರಾಣದ ಹೋಕು! ಕೂಡಲಸಂಗಮದೇವಾ.