ಬಸವಣ್ಣ   
  ವಚನ - 825     
 
ಅರಸು ಮುನಿದರೆ ನಾಡೊಳಗಿರಬಾರದಯ್ಯಾ! ಗಂಡ ಮುನಿದರೆ ಹೆಂಡತಿಗೆ ಇರಬಾರದಯ್ಯಾ. ಕೂಡಲಸಂಗಮದೇವಯ್ಯಾ. ಜಂಗಮ ಮುನಿದರೆ ನಾನೆಂತು ಬದುಕುವೆ?