ಬಸವಣ್ಣ   
  ವಚನ - 827     
 
ಭೂತವೊಲಿದು ಆತ್ಮನ ಸೋಂಕಿದ ಬಳಿಕ ಭೂತದ ಗುಣವಲ್ಲದೆ ಆತ್ಮನ ಗುಣವುಂಟೆ? ಗುರುಕಾರುಣ್ಯವಾಗಿ ಹಸ್ತಮಸ್ತಕ ಸಂಯೋಗವಾದ ಬಳಿಕ ಗುರುಲಿಂಗಜಂಗಮವೆ ಗತಿಯಾಗಿದ್ದೆ, ಕಾಣಾ, ಕೂಡಲಸಂಗಮದೇವಾ.