ಬಸವಣ್ಣ   
  ವಚನ - 833     
 
ಮುನ್ನಿನ ಜನ್ಮದಲ್ಲಿ ಗುರುಲಿಂಗಜಂಗಮವ ಪೂಜಿಸಲರಿಯದ ಕಾರಣ ಬಹುಜನ್ಮಕ್ಕೆ ತಂದಿಕ್ಕಿದೆಯಯ್ಯಾ ಎನ್ನನು. ಎನಗೆ ಗುರುಪಥವ ತೋರಿದವರಾರು? ಲಿಂಗಪಥವ ತೋರಿದವರಾರು? ಜಂಗಮಪಥವ ತೋರಿದವರಾರು? ಪಾದೋದಕ ಪ್ರಸಾದಪಥವ ತೋರಿದವರಾರು? ತೋರುವ ಮನವೆ ನೀವೆಂದರಿದೆ! ಎನಗಿನ್ನಾವ ಭಯವಿಲ್ಲಾ, ಕೂಡಲಸಂಗಮದೇವಾ.