ಬಸವಣ್ಣ   
  ವಚನ - 835     
 
ಆಸೆಯಾಮಿಷ ತಾಮಸದಿಂದ ಭವಬಂಧನವಾದುದನರಿಯಾ; ತ್ರಿವಿಧ ತ್ರಿವಿಧಾವಸ್ಥೆಯ ಮರೆಯಾ ! 'ಓಂ ನಮಃ ಶಿವಾಯ, ಶರಣೆಂಬುದʼ ಬಿಡದೆ ನೆನೆಯಾ ಮನವೆ ! 'ಮಹಂತ ಶಿವಲಿಂಗಸ್ಯ ಮಹಂತೊ ಜಂಗಮಸ್ತತಾʼ ಕೂಡಲಸಂಗನ ಪ್ರಸಾದ ಸಾನ್ನಿಧ್ಯದಿಂದ ಭವಜನ್ಮ ಕರ್ಮ ಪಂಚಭೂತಪೂರ್ವನಾಸ್ತಿ.