ಬಸವಣ್ಣ   
  ವಚನ - 837     
 
ಪರಿಯಾಣವೆ ಭಾಜನವೆಂಬರು; ಪರಿಯಣ ಭಾಜನವಲ್ಲ, ಲಿಂಗಕ್ಕೆ ತನ್ನ ಮನವೆ ಭಾಜನ. ಪ್ರಾಣವನು ಬೀಸರವೋಗದೆ ಮೀಸಲಾಗರ್ಪಿಸಬಲ್ಲರೆ ಕೂಡಿಕೊಂಡಿರ್ಪ, ನಮ್ಮ ಕೂಡಲಸಂಗಮದೇವ.