ಬಸವಣ್ಣ   
  ವಚನ - 839     
 
ಲೋಹ ಪರುಷವ ಮುಟ್ಟುವುದಲ್ಲದೆ, ಪರುಷ ಪರುಷವ ಮುಟ್ಟುವುದೆ, ಅಯ್ಯಾ? ಅಂಗವಿಡಿದಂಗೆ ಪ್ರಸಾದವಲ್ಲದೆ, ಲಿಂಗವಿಡಿದಂಗೆ ಪ್ರಸಾದವೆಲ್ಲಿಯದೊ? ʼಆಣೋರಣೀಯಾನ್ ಮಹತೋ ಮಹೀಯಾನ್', ಹಿರಿದಕ್ಕೆ ಹಿರಿದು, ಕಿರಿದಕ್ಕೆ ಕಿರಿದು, ವಾಙ್ಮನಕ್ಕಗೋಚರ- ಕೂಡಲಸಂಗಮದೇವ ಸ್ವರೂಪು: ಪ್ರಸಾದ ನಿರೂಪು, ಲಿಂಗೈಕ್ಯ!