ಬಸವಣ್ಣ   
  ವಚನ - 856     
 
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ, ಅನುಭಾವವೆಲ್ಲಿಯದೊ- ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ, ಅರಿಷಡ್ವರ್ಗ ದಶವಾಯು ಬೆರಸಿರ್ಪ ಕಳಂಕವಪ್ಪ ತನು ಬಿಡದನ್ನಕ್ಕ? ಸಂಸಾರ ಮಾಣ್ದಲ್ಲದೆ ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು ದುರಾಚಾರಿಗಳಿಗಳವಡದು, ನಮ್ಮ ಕೂಡಲಸಂಗನ ಶರಣರಿಗಲ್ಲದೆ.