ಬಸವಣ್ಣ   
  ವಚನ - 860     
 
ಮರುಳು ಕಂಡ ಕನಸಿನ ಪರಿಯಂತೆ ಶಿವಾಚಾರ, ಕರಿಯು ಕನ್ನಡಿಯೊಳಗಡಗಿದಂತಯ್ಯಾ ! ಗುಣಿಯವಗುಣಿಯೊಡನಾಡಿದರೆ ಅದೆ ಆತನ ಕರ್ಮದ ಫಲ, ನೋಡಾ ! ಕೂಡಲಸಂಗನ ಶರಣರ ಅನುಭಾವ ಭವದುಃಖಿಗಳಿಗೆ ವೇದ್ಯವಾಗದಯ್ಯಾ.