ಬಸವಣ್ಣ   
  ವಚನ - 861     
 
ಉಂಬ ಬಟ್ಟಲು ಬೇರೆ ಕಂಚಲ್ಲ: ನೋಡುವ ದರ್ಪಣ ಬೇರೆ ಕಂಚಲ್ಲ; ಭಾಂಡ ಒಂದೆ, ಭಾಜನ ಒಂದೆ: ಬೆಳಗೆ ಕನ್ನಡಿಯೆನಿಸಿತ್ತಯ್ಯಾ! ಅರಿದರೆ ಶರಣ; ಮರೆದರೆ ಮಾನವ; ಮರೆಯದೆ ಪೂಜಿಸು ಕೂಡಲಸಂಗಯ್ಯನ.