ಬಸವಣ್ಣ   
  ವಚನ - 863     
 
ಪುಣ್ಯಪಾಪವೆಂಬುಭಯಕರ್ಮವನಾರು ಬಲ್ಲರಯ್ಯಾ ? ಇವನಾರುಂಬರು? ಕಾಯ ತಾನುಂಬರೆ ಕಾಯ ಮಣ್ಣು; ಜೀವ ತಾನುಂಬರೆ ಜೀವ ಬಯಲು! ಈ ಉಭಯನಿರ್ಣಯವ ಕೂಡಲಸಂಗಮದೇವಾ, ನಿಮ್ಮ ಶರಣ ಬಲ್ಲ.