ಬಸವಣ್ಣ   
  ವಚನ - 866     
 
ಲಿಂಗನಿಷ್ಠೆ ಪೂಜೆಯಲ್ಲಿ ಬೀಯವಾಯಿತ್ತು; ಭಕ್ತಿ ನಿಷ್ಠೆ ಆಚರಣೆಯಲ್ಲಿ ಬೀಯವಾಯಿತ್ತು, ಪ್ರಸಾದನಿಷ್ಠೆ ಬೆರಕೆಯಲ್ಲಿ ಬೀಯವಾಯಿತ್ತು: ಒಂದೊಂದರರ ನಿಷ್ಠೆ ಅಂದಂದಿಗೆ ಬೀಯವಾಯಿತ್ತು, ಕೂಡಲಸಂಗಮದೇವನ ಭಕ್ತಿ ತ್ರಿಜಗವನಾಳಿಗೊಂಡಿತ್ತು.