ಬಸವಣ್ಣ   
  ವಚನ - 871     
 
ಪೂರ್ವಜನ್ಮ ನಿವೃತ್ತಿಯಾಗಿ ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ? ಭವಬಂಧನವೆಲ್ಲಿಯದೊ- ಸಂಕಲ್ಪ-ವಿಕಲ್ಪವೆಂಬ ಸಂದೇಹ ಕಳೆದುಳಿದವಂಗೆ: ಕೂಡಲಸಂಗಮದೇವನ ತ್ರಿಸಂಧ್ಯಾಕಾಲದಲ್ಲಿ ಮಾಣದೆ ನೆನೆವಂಗೆ?