Hindi Translationदेखो, शरण का सोना जप है,
शरण का जागना शिवरात्रि है,
शरण का चलना ही पावन है,
शरण का बोलना ही शिवतत्व है,
कूडलसंगमदेव के शरण की काया ही कैलास है ॥
Translated by: Banakara K Gowdappa
English Translation Look you, the 'Śaraṇāss sleep is telling of beads;
It's Śivarātri when he wakes and sits;
Wherever he treads is holy ground;
And Śiva doctrine whatever he speaks;
The body of Kūḍala Saṅg's Śaraṇās
Is very abode of Śiva!
Translated by: L M A Menezes, S M Angadi
Tamil Translationசரணனின் சரணத்தலம்
சரணன் உறங்கின் அது செபம் காணீரோ
சரணன் எழுந்து அமர்ந்தால் அவசிவராத்திரி காணீரோ
சரணன் நடப்பதே புனிதம் காணீரோ
சரணன் மொழிந்ததே சிவதத்துவம் காணீரோ
கூடல சங்கனின் சரணனின் உடலே கைலாசம் காணீரோ
Translated by: Smt. Kalyani Venkataraman, Chennai
ಶಬ್ದಾರ್ಥಗಳು Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 638
ಕನ್ನಡ ವ್ಯಾಖ್ಯಾನಶರಣನ ದೇಹ ಪೀಠವಾಗಿ ಮನಸ್ಸು ಲಿಂಗವಾಗಿರುತ್ತದೆ. ಶಿವಶಕ್ತಿ ಸಂಗಮಸ್ಥಾನದಂತೆ ಶರಣನು ಕಂಗೊಳಿಸುತ್ತಾನೆ. ಅವನ ನಿದ್ರೆ ಯೋಗನಿದ್ರೆ, ಎಚ್ಚರ ಶಿವರಾತ್ರಿಯ ಜಾಗರಣೆ, ನಡೆದಾಡುವುದು ಯಾತ್ರೆ, ಮಾತು ಶಿವತತ್ತ್ವ ಪ್ರವಚನ. ಅವನ ಇರವೇ ಕೈಲಾಸವಾಗಿ -ಸುತ್ತಲೂ ಒಂದು ಪವಿತ್ರ ಪ್ರಭಾವಳಿ ಏರ್ಪಟ್ಟಿರುವುದು.
ಶರಣನಲ್ಲದವನು ಜಪಮಾಡುತ್ತಿದ್ದರೆ ನಿದ್ರೆಹೋದಂತೆ, ಜಾಗರಣೆ ಮಾಡುತ್ತಿದ್ದರೆ ನಿದ್ರೆಗೆಟ್ಟವನಂತೆ, ತೀರ್ಥಯಾತ್ರೆ ಮಾಡುತ್ತಿದ್ದರೆ ವಿನೋದ ಪ್ರವಾಸ ಹೊರಟವನಂತೆ, ತತ್ತ್ವವಿಚಾರ ಮಾಡುತ್ತಿದ್ದರೆ ಹರಟುವನಂತೆ ಅನಿಸುವುದು. ಅವನು ಬಾಹ್ಯಾಭ್ಯಂತರ ತಾಮಸಮಯ, ಅಹಂಕಾರವೇ ಅವನಿಗೆ ಜೀವಾತ್ಮ ಅಂತರಾತ್ಮ ಪರಮಾತ್ಮ. ಪುಚ್ಛವಿಷಾಣಹೀನ ಪಶುವಿನ ಅಚ್ಚ ಅವತಾರವವನು.
ಅಚ್ಚ ಶರಣನಿಗಾದರೋ ಜಪಜಾಗರಣೆ ಮುಂತಾದುವು ಅತ್ಯಂತ ಸಹಜಕ್ರಿಯೆಗಳಾಗಿಯೇ ಒಪ್ಪುವವು –ಏಕೆಂದರೆ ಅವನ ಸ್ಥೂಲದಲ್ಲಿ ಗುರು, ಸೂಕ್ಷ್ಮದಲ್ಲಿ ಲಿಂಗ, ಕಾರಣದಲ್ಲಿ ಜಂಗಮ ನೆಲಸಿರುವುದಾಗಿ ಅವನು ಸರ್ವತೋಮುಖವಾಗಿ ಶಿವನೇ ಆಗಿರುವನು. ಆದ್ದರಿಂದಲೇ ಅವನು ನಿದ್ರಿಸಿದರೆ ಜಪ, ಎಚ್ಚರವಾದರೆ ಶಿವರಾತ್ರಿ, ನಡೆದರೆ ಯಾತ್ರೆ, ನುಡಿದರೆ ಮಂತ್ರೋಚ್ಚಾರಣೆ –ಅವನ ಕಾಯವೇ ಕೈಲಾಸ. ಅವನ ಜೀವವೇ ಶಿವ.
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.