ಬಸವಣ್ಣ   
  ವಚನ - 879     
 
ನೆಲನೊಂದೆ ಹೊಲಗೇರಿ-ಶಿವಾಲಯಕ್ಕೆ; ಜಲವೊಂದೆ ಶೌಚಾಚಮನಕ್ಕೆ; ಕುಲವೊಂದೆ ತನ್ನ ತಾನರಿದವಂಗೆ; ಫಲವೊಂದೆ ಷಡುದರುಶನ ಮುಕ್ತಿಗೆ; ನಿಲವೊಂದೆ, ಕೂಡಲಸಂಗಮದೇವಾ, ನಿಮ್ಮನರಿದವಂಗೆ.