ಬಸವಣ್ಣ   
  ವಚನ - 883     
 
ಮರಮರ ಮಥನದಿಂದ ಅಗ್ನಿ ಹುಟ್ಟಿ ಆ ಮರನೆಲ್ಲವ ಸುಡದಿಪ್ಪುದೆ? ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ ಎನ್ನ ತನುಗುಣವೆಲ್ಲವ ಸುಡದಿಪ್ಪುದೆ? ಇದು ಕಾರಣ, ಮಹಾನುಭಾವರ ತೋರಿಸು, ಕೂಡಲಸಂಗಮದೇವಾ.