ಬಸವಣ್ಣ   
  ವಚನ - 885     
 
ಮೀಸಲು ಬೀಸರವಾದ ಪರಿಯ ನೋಡಾ: ಕಾಲು ತಾಗಿದ ಅಗ್ಘವಣಿ, ಕೈಮುಟ್ಟಿದ ಅರ್ಪಿತ, ಮನಮುಟ್ಟಿದ ಆರೋಗಣೆಯನೆಂತು ಘನವೆಂಬೆನಯ್ಯಾ? ಬಂದ ಪರಿಯಲ್ಲಿ ಪರಿಣಾಮಿಸಿ, ನಿಂದ ಪರಿಯಲ್ಲಿ ನಿಜವ ಮಾಡಿ, ಆನೆಂದ ಪರಿಯಲ್ಲಿ ಕೈಕೋ, ಕೂಡಲಸಂಗಮದೇವಾ.