ಶುದ್ಧವಾಯಿತ್ತೆಂಬೆನೆ? ಸುಯಿಧಾನಿ ನಾನಲ್ಲ;
ಅನುವಾಯಿತ್ತೆಂಬೆನೆ? ಅವಧಾನಿ ನಾನಲ್ಲ.
ಸುಯಿಧಾನಿ ಅವಧಾನಿ ಅರ್ಪಿತವ ನಾನರಿಯೆ:
ಇದ್ದ ಪರಿಯಲ್ಲಿ ನೀಡಿದರೆ, ಬಂದ ಪರಿಯಲ್ಲಿ ಕೈಕೊ,
ಕೂಡಲಸಂಗಮದೇವಾ.
Music Courtesy: Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 541
Video
TransliterationŚud'dhavāyittembene? Suyidhāni nānalla;
anuvāyittembene? Avadhāni nānalla.
Suyidhāni avadhāni arpitava nānariye:
Idda pariyalli nīḍidare, banda pariyalli kaiko,
kūḍalasaṅgamadēvā.
Hindi Translationशुद्ध हुआ कहूँ? मैं सावधानी नहीं हूँ ।
सदुपयोग हुआ कहूँ? मैं अवधानी नहीं हूँ ।
सावधान, अवधान का अर्पण मैं नहीं जानता
जैसे मैं अर्पित करता हूँ वैसे ले लो कूडलसंगमदेव॥
Translated by: Banakara K Gowdappa
English Translation Shall I claim it to be pure?
I am not so particular!
Shall I claim it to be perfect?
Such niceness is not mine!
Nothing I know of offerings
So scrupulously picked.
So when I serve it as it is,
Accept is as it comes,
O Kūḍala Saṅgama Lord!
Translated by: L M A Menezes, S M Angadi
Tamil Translationதூய்மையாக உள்ளது என்பேனோ?
விழிப்புணர்வு உள்ளவன் நான் அன்று
முறையாக உள்ளது என்பேனோ?
விழிப்புணர்வு உள்ளவன் நான் அன்று
விழிப்புணர்வோடு அர்ப்பிப்பதை நான் அறியேன்
உள்ளவாறு அளிப்பின் வந்தவாறு ஏற்பாய்
கூடல சங்கமதேவனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು Deprecated: html_entity_decode(): Passing null to parameter #1 ($string) of type string is deprecated in /home4/taralmti/public_html/taralabalu/vachana/vdetail.php on line 638
ಕನ್ನಡ ವ್ಯಾಖ್ಯಾನಪಂಚೇಂದ್ರಿಯಗಳ ಬಾಗಿಲಲ್ಲಿ ಕಾವಲು ನಿಂತು ಅಲ್ಲದುದನ್ನು ಒಳಗೆ ಬಿಡದೆ ಸಲ್ಲುವುದನ್ನೇ ನಿನಗೆ ಅರ್ಪಿಸೋಣವೆಂದರೆ ಆ ಜಿತೇಂದ್ರಿಯತ್ವ(ಸುಯಿಧಾನ)ವು ನನಗಿಲ್ಲ. ಎಲ್ಲವನ್ನೂ ಮನದ ಮೂಲಕವಾದರೂ ಸೋಸಿ ಅಣಿಮಾಡಿ ನಿನಗರ್ಪಿಸುವೆನೆಂದರೆ ಆ ಅವಧಾನಿ(ಮನಶ್ಯುದ್ಧಿ)ತನವೂ ನನಗಿಲ್ಲ.
ಆದ್ದರಿಂದ ನಾನು ಅರ್ಪಿಸುವ ಪದಾರ್ಥವಾಗಲಿ ನನ್ನ ಮನವಾಗಲಿ ಶುದ್ಧವಿಲ್ಲವಾಗಿ -ನನ್ನ ಶಿವಾರ್ಪಣವಿಧಾನ ನಿಷ್ಕಳಂಕವಾಗಿಲ್ಲ. ಈ ನಾನಿರುವ ರೀತಿಯಲ್ಲೇ ನನ್ನನ್ನು ನಿನಗೆ ಸಮರ್ಪಿಸಿಕೊಳ್ಳುತ್ತೇನೆ-ನನ್ನನ್ನು ನಿನ್ನವನನ್ನಾಗಿ ಸ್ವೀಕರಿಸು ಎಂದು ಬಸವಣ್ಣನವರು ಶಿವನಲ್ಲಿ ಮೊರೆಯಿಡುತ್ತಿರುವರು.
ವಿ : ಸುಯಿಧಾನ(<ಸುವಿಧಾನ ?)ವೆಂದರೆ ಹೊರಗಣ ಸಜ್ಜು, ಅವಧಾನವೆಂದರೆ ಒಳಗಣ ಸಜ್ಜು. ನೋಡಿ : ಚಿತ್ತಶುದ್ಧದಿಂ ಜ್ಞಾನದೀಪವ ಸುಯಿಧಾನವಾಗಿ ಬೆಳಗೆಯಮ್ಮ (ಶಿವದಾಸಗೀತಾಂಜಲಿ 792ವ), ಅದೆಂಥಾ ಸುಯಿಧಾನವೆ ತಾಯಿ ? ಒಂಭತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬರನು ಬಿಡದಿರೆ (ಅದೇ -801ವ), ಗುಣಕಮಳಕುಸುಮ ಪರಿಮಳ ನಿಳಯನು ಸುಳುಹು ಸುಯ್ದಾನಿ ಮಹಿಮ ಶರಣ (ಅದೇ 250), ಅವಧಾನಭಕ್ತಿಯಿಂ ಪ್ರಸಾದಿಯನರಿದು ನಿರಹಂಕಾರ ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ (ಅದೇ 804ವ).
ಬಸವಣ್ಣ ಭಾರತದ 12 ನೇ ಶತಮಾನದ ಹಿಂದೂ ತತ್ವಜ್ಞಾನಿ, ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು. ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು . ಬಸವಣ್ಣ ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು, ಬಸವಣ್ಣ ಲಿಂಗ ತಾರತಮ್ಯ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ನಿರಾಕರಿಸಿದರು. ಇಷ್ಟಲಿಂಗವನ್ನು ಪರಿಚಯಿಸಿದರು ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ, ಅನುಭವ ಮಂಟಪದಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು. ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಸಾಂಪ್ರದಾಯಿಕ ದಂತಕಥೆಗಳು ಮತ್ತು ವಿದ್ವತ್ಪೂರ್ಣ ಗ್ರಂಥಗಳು ಲಿಂಗಾಯ ಸ್ಥಾಪಕ ಬಸವಣ್ಣ ಎಂದು ಉಲ್ಲೇಖಿಸುತ್ತವೆ . ಆದಾಗ್ಯೂ, ಆಧುನಿಕ ಕಲಾಚುರಿ ಶಾಸನಗಳಂತಹ ಐತಿಹಾಸಿಕ ಸಾಕ್ಷ್ಯವನ್ನು ಅವಲಂಬಿಸಿದೆ ಬಸವ ಕವಿ ತತ್ತ್ವಜ್ಞಾನಿಯಾಗಿದ್ದು, ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಪ್ರದಾಯವನ್ನು ಸಂಸ್ಕರಿಸಿದರು ಮತ್ತು ಶಕ್ತಿಯನ್ನು ತುಂಬಿದರು ಎಂದು ಉಲ್ಲೇಖಿಸುತ್ತವೆ. ಕನ್ನಡ ಕವಿ ಹರಿಹರರಿಂದ ರಚಿತ ಬಸವರಾಜದೇವರ ರಗಳೆ ಸಾಮಾಜಿಕ ಸುಧಾರಕನ ಜೀವನದ ಬಗ್ಗೆ ಲಭ್ಯವಿರುವ ಅತ್ಯಂತ ಆರಂಭಿಕ ಖಾತೆಯಾಗಿದೆ ಮತ್ತು ಲೇಖಕನು ತನ್ನ ನಾಯಕನ ಸಮಕಾಲೀನ ಸಮೀಪದಲ್ಲಿದ್ದ ಕಾರಣದಿಂದಾಗಿ ಅದು ಮುಖ್ಯವೆಂದು ಪರಿಗಣಿಸಲಾಗಿದೆ. ಬಸವನ ಜೀವನ ಮತ್ತು ವಿಚಾರಗಳ ಸಂಪೂರ್ಣ ವಿವರ 13 ನೇ ಶತಮಾನದ ಪವಿತ್ರ ತೆಲುಗು ಪಠ್ಯ ಪಾಲ್ಕುರಿಕಿ ಸೋಮನಾಥರ ಬಸವ ಪುರಾಣದಲ್ಲಿ ನಿರೂಪಿಸಲ್ಪಟ್ಟಿದೆ. ಬಸವ ಸಾಹಿತ್ಯ ಕೃತಿಗಳು ಕನ್ನಡ ಭಾಷೆಯಲ್ಲಿ ವಚನ ಸಾಹಿತ್ಯವನ್ನು ಒಳಗೊಂಡಿದೆ. ಅವರನ್ನು ಭಕ್ತಿಭಂಡಾರಿ ಎಂದೂ ಕರೆಯುತ್ತಾರೆ.