ಬಸವಣ್ಣ   
  ವಚನ - 887     
 
ಶುದ್ಧವಾಯಿತ್ತೆಂಬೆನೆ? ಸುಯಿಧಾನಿ ನಾನಲ್ಲ; ಅನುವಾಯಿತ್ತೆಂಬೆನೆ? ಅವಧಾನಿ ನಾನಲ್ಲ. ಸುಯಿಧಾನಿ ಅವಧಾನಿ ಅರ್ಪಿತವ ನಾನರಿಯೆ: ಇದ್ದ ಪರಿಯಲ್ಲಿ ನೀಡಿದರೆ, ಬಂದ ಪರಿಯಲ್ಲಿ ಕೈಕೊ, ಕೂಡಲಸಂಗಮದೇವಾ.