ಬಸವಣ್ಣ   
  ವಚನ - 888     
 
ಪಾದಾರ್ಚನೆಯ ಮಾಡುವೆನಯ್ಯಾ, ಪಾದೋದಕದ ಹಂಗಿಗೆ; ʼಶರಣಾರ್ಥಿʼ ಎಂಬೆನಯ್ಯಾ ಒಕ್ಕುದ ಕೊಂಬ ಹಂಗಿಗೆ! ಎಡೆಯಾಟ ಕಡಬಡ್ಡಿಯ ಕೊಟ್ಟು ಕೆಟ್ಟಿತ್ತು, ನೋಡಾ, ಭಕ್ತಿ! ಕೂಡಲಸಂಗನ ಶರಣರ ನಿಲವನರಿಯದೆ, ಮುಯ್ಯಿಗೆ ಮುಯ್ಯಾಗಿ ಕೆಟ್ಟಿತ್ತಯ್ಯಾ ಎನ್ನ ಭಕ್ತಿ!