ಬಸವಣ್ಣ   
  ವಚನ - 890     
 
ಕಳಾಬಿಂದು ವಟಾಮುಖಿಯೆಂಬ ಹೆಂಗೂಸಿನ ಕೈಯಲು ಜಲಾಕಾರವೆಂಬ ಗಡಿಗೆ ಇದ್ದಿತ್ತು, ಆ ಗಡಿಗೆಯಲ್ಲಿ ಚೆನ್ನಬಸವಣ್ಣ ನೀರ ತಂದ, ಮಡಿವಾಳಯ್ಯ ಸಯಿದಾನವ ತಂದ, ಇದರೊಲೆಯಡಿಯನುರುಹಿ ಕೊಡಾ, ಕೂಡಲಸಂಗಮದೇವಾ.