ಬಸವಣ್ಣ   
  ವಚನ - 891     
 
ದಿಟವ ಮಾಡಿ ಪೂಜಿಸಿದರೆ ಸಟೆಯ ಮಾಡಿ ಕಳೆವೆ, ಸಟೆಯ ಮಾಡಿ ಪೂಜಿಸಿದರೆ ದಿಟವ ಮಾಡಿ ಕಳೆವೆ! ಏನೆಂಬೆ, ಎಂತೆಂಬೆ? ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ ಆನು ಮಾಡಿದ ಭಕ್ತಿ ಎನಗಿಂತಾಯಿತ್ತು, ಕೂಡಲಸಂಗಮದೇವಾ!