ಬಸವಣ್ಣ   
  ವಚನ - 892     
 
ಎಂಬತ್ತೆಂಟು ಪವಾಡವ ಮೆರೆದು ಹಗರಣದ ಚೋಹದಂತಾಯಿತೆನ್ನ ಭಕ್ತಿ! ತನುವಿನೊಳಗೆ ಮನ ಸಿಲುಕದೆ, ಮನ ತನುವಿನೊಳಗೆ ಸಿಲುಕದೆ, ತನು ಅಲ್ಲಮನಲ್ಲಿ ಸಿಲುಕಿತ್ತು, ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು! ನಾನೇತರಲ್ಲಿ ನೆನೆವೆ, ಕೂಡಲಸಂಗಮದೇವಾ?