ಬಸವಣ್ಣ   
  ವಚನ - 899     
 
ಅಷ್ಟವಿಧಾರ್ಚನೆ ಷೋಡಶೋಪಚಾರವಲ್ಲದೆ ನಿಮ್ಮ ಮುಟ್ಟಲರಿಯದವರ ಕಂಡರೆ, ಅಯ್ಯನೆತೆಂಬೆನವರ? ಆವ ಭಾವದಲ್ಲಿ, ಆವ ಜ್ಞಾನದಲ್ಲಿ, ಆವ ಮುಖದಲ್ಲಿ ಅರಿವವರದಾರಯ್ಯಾ: ಏನೆಂಬೆ? ನಿಮ್ಮಲ್ಲಿ ಸಮ್ಯಕ್ಕರಾದ ಸತ್ಯಶರಣರ ಕಂಡು ಕೂಡಲಸಂಗಮದೇವಾ, ಅವರನಯ್ಯಯೆಂಬೆನು.