ಬಸವಣ್ಣ   
  ವಚನ - 900     
 
ಮರನ ಹೂವ ಕೊಯಿದು ಮರಕ್ಕೇರಿಸಿ, ನದಿಯುದಕವ ನದಿಗರ್ಪಿತವ ಮಾಡಿ, ಕರುವನಗಲಿಸಿ, ತಾಯ ಮರುಗಿಸಿ ಮೊಲೆವಾಲ ಕರೆದುಣಬೇಡವೊ! ಕೂಡಲಸಂಗಮದೇವಾ, ನೀ ಮಾಡಿದ ಮಾಯೆ, ಹಲಬರ ಬಾಯ ಟೊಣೆದೇ ಹೋಯಿತ್ತು!