ಬಸವಣ್ಣ   
  ವಚನ - 901     
 
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ, ಕೋಪದಲ್ಲಿ ಶಿವಕಳೆಯಾದ ಕರಡಿಗೆಯನೆ ಮುರಿದ, ಧೂಪಗುಂಡಿಗೆಯನೊಡೆದ, ದೀಪಾರತಿಯ ನಂದಿಸಿದ, ಬಪ್ಪ ಪರಿಯಾಣದೋಗರವ ತುಡುಕಿದ: ಪಾಪಕರ್ಮ, ಕೂಡಲಸಂಗಮದೇವಾ, ನಿಮ್ಮ ಶರಣ!