ಬಸವಣ್ಣ   
  ವಚನ - 907     
 
ಆ ರತ್ನ ಪ್ರಸಾದವನಾರಾಧಿಸುತ್ತಿರಲು ಆ ಪ್ರಸಾದವಲ್ಲಿ ಬೀಳುತ್ತ ಆಳುತ್ತೆದ್ದಿತ್ತು, ನೋಡಾ! ಅದ ಹಲಬರು ನೋಡಿ ನೋಡಿ ಹೋಗುತ್ತಿದ್ದರು; ಆ ಪ್ರಸಾದ ತಾನೇ ಬಂದು ಎನ್ನ ಸುತ್ತಿಕೊಂಡಿತ್ತು; ಇದ ಪದಾರ್ಥವ ಮಾಡಿಕೊಡೈ ಕೂಡಲಸಂಗಮದೇವಾ.