ಬಸವಣ್ಣ   
  ವಚನ - 908     
 
ಎಲ್ಲರ ಗಂಡರೂ ಬೇಂಟೆಗೆ ಹೋದರು: ನೀನೇಕೆ ಹೋಗೆ, ಎಲೆ ಗಂಡನೇ? ಸತ್ತುದ ತಾರದಿರು, ಕೈಮುಟ್ಟಿ ಕೊಲ್ಲದಿರು, ಅಡಗಿಲ್ಲದೆ ಮನೆಗೆ ಬಾರದಿರು! ದೇವರ ಧರ್ಮದೊಳೊಂದು ಬೇಂಟೆ ದೊರೆಕೊಂಡರೆ ಕೂಡಲಸಂಗಮದೇವಂಗರ್ಪಿತವ ಮಾಡುವೆ, ಎಲೆ ಗಂಡನೇ!