ಬಸವಣ್ಣ   
  ವಚನ - 911     
 
ʼಭೂತಿಕನ ಸೀರೆಯ ಸಾತ್ವಿಕ ನೆರೆ ಉಟ್ಟರೆ, ಭೂತಿಕ ಸಾತ್ವಿಕನಾದ, ಸಾತ್ವಿಕ ಭೂತಿಕನಾದ:ʼ ಈ ಮಾತು ಬಿದ್ದುದು ನೋಡಾ, ರಾಜಬೀದಿಯಲ್ಲಿ, ಅಯ್ಯಾ, ಭೂತ ಕೆಣಕಿದರಿಲ್ಲ, ಮಾತು ಮುಚ್ಚಿದರಿಲ್ಲ: ಓತು ಕೂಡುವ ಅನುವ, ಕೂಡಲಸಂಗಮದೇವ ತಾನೆ ಬಲ್ಲ.