ಬಸವಣ್ಣ   
  ವಚನ - 914     
 
ಸತ್ಯವಿದೆ, ಸಮಾಧಾನವಿದೆ; ಮನಕ್ಕೆ ಬಾರದಿದೇನಯ್ಯಾ? ಸರ್ವಸನುಮತವೆಂಬ ಸುಖವಿದೆ; ಮನಕ್ಕೆ ಸೋಂಕದಿದೇನಯ್ಯಾ? ಆನೀನೆಂಬುದೊಂದು ಘನವಿದೆ, ಕೂಡಲಸಂಗಮದೇವಾ, ಭ್ರಮೆಯೋ?