ಬಸವಣ್ಣ   
  ವಚನ - 917     
 
ಅನಾಯಾಸದಿಂದ ಮನೆಯ ಮಾಡಿ, ನಿರಾಯಾಸದಿಂದ ಪರಮಸುಖಿ! ರೂಹಿಸುವಲ್ಲಿ ರೂಪಾಧಿಕ, ನೋಡುವಲ್ಲಿ ನೋಟ ಘನ! ಇಂತಪ್ಪ ಸಹಜಸಂಗಿಯ ನಿಲವಿನ ಪರಿ; ಉದಕದೊಳಗಣ ಬಿಂದು ಉದಯರತ್ನದಂತೆ ಕೂಡಲಸಂಗನ ಶರಣರ ನಿಲವು!!