ಬಸವಣ್ಣ   
  ವಚನ - 921     
 
ಉಮಾಧಿನಾಥರು ಕೋಟಿ, ಪಂಚವಕ್ತ್ರರು ಕೋಟಿ, ನಂದಿವಾಹನರೊಂದು ಕೋಟಿ, ನೋಡಯ್ಯಾ; ಸದಾಶಿವರೊಂದು ಕೋಟಿ, ಗಂಗೆವಾಳುಕ ಸಮರುದ್ರರು ಇವರೆಲ್ಲರೂ ಕೂಡಲ ಸಂಗನ ಸಾನ್ನಿಧ್ಯರಲ್ಲದೆ, ಸಮರಸವೇದ್ಯರೊಬ್ಬರೂ ಇಲ್ಲಾ!