ಬಸವಣ್ಣ   
  ವಚನ - 922     
 
ರಕ್ಕಸಿಯ ಮನೆಯಲ್ಲು ಭೋಜನವುಂಡು ತೃಪ್ತಿಯಾಯಿತ್ತೆಂದು ಬೆಸಗೊಂಡರೆ ಹೇಳಿಹೆನು: ʼನೀರ ಕೈಯಲು ಕಿಚ್ಚ ಬಯ್ಕೆಯ ಕೊಟ್ಟಂತೆ ಸಾಯುಜ್ಯ ಪದವಿಯನವರೆತ್ತ ಬಲ್ಲರು? ಮಹಾದಾನಿ ಕೂಡಲಸಂಗನ ಸಮರಸ ಸುಖವನವರೆತ್ತ ಬಲ್ಲರು?ʼ