ಬಸವಣ್ಣ   
  ವಚನ - 925     
 
ಮಾತಿಲ್ಲ ನುಡಿಯಿಲ್ಲ, ಏತಕ್ಕೆ ಮುನಿವಿರಿ ? ಮಾತಾಡಿದರೆ ಕೆಯ್ಯ ಬೆಳಸೆಂಬುದನರಿಯಿರೆ, ಅಯ್ಯಾ? ಮಾತು ಕೆಟ್ಟಲ್ಲದೆ ತಾನಾಗಬಾರದು. ಕೂಡಲಸಂಗಮದೇವಯ್ಯಾ, ಮಾತಿಂದ ಬರ್ಕು ಭವಭಾರ ಘೋರ!