ಬಸವಣ್ಣ   
  ವಚನ - 939     
 
ಭಿತ್ತಿಯಿಲ್ಲದ ಚಿತ್ತಾರದಂತೆ, ಭಕ್ತಿಯಿಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯಾ? ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯಾ? ಗೆರೆಯಿಲ್ಲದ ಕೋಲಿನಲಿ ಉದ್ದರೆಯನಿಕ್ಕಿದ ಭಂಡದಹರದನಂತಾದೆನಯ್ಯಾ! ಕೂಡಲಸಂಗಮದೇವಾ.