ಬಸವಣ್ಣ   
  ವಚನ - 943     
 
ಮಿಥ್ಯೆಯನಳಿದುಳಿದ ಸತ್ಯಪ್ರಸಾದಿ; ಅಂಜನವಿಲ್ಲದ ನಿರಂಜನಪ್ರಸಾದಿ; ದುಃಖವನಳಿದ ಘನಾನಂದಪ್ರಸಾದಿ; ಅನಿತ್ಯವಿಲ್ಲದ ನಿತ್ಯಪ್ರಸಾದಿ; ಖಂಡಿತವಿಲ್ಲದ ಅಖಂಡಿತಪ್ರಸಾದಿ; ಕೂಡಲಸಂಗಮದೇವರಲ್ಲಿ ತಾನೇ ಪ್ರಸಾದಿ.