ಬಸವಣ್ಣ   
  ವಚನ - 950     
 
ಭೂ ತೋಯ ಪಾವಕ ಸಮೀರಣ ಅಂಬರಾದಿಗಳೆಲ್ಲ ಆದಿಯಾಧಾರದ ಪರಮಾತ್ಮಲಿಂಗದಲ್ಲಿ! ಆದಿ ಮಧ್ಯಾವಸಾನವನರಿಯದ ಅಗಮ್ಯ! ವೇದಾದಿ ಸಕಲಶಾಸ್ತ್ರಪ್ರಮಾಣರು ಅದನಂತಿಂತೆಂದುಪಮಿಸಲಿಲ್ಲಾ, ಮಹಂತ ಕೂಡಲಸಂಗಮದೇವಾ.