ಬಸವಣ್ಣ   
  ವಚನ - 952     
 
ಹುತ್ತಕ್ಕೆ ಏಸು ಬಾಯಾದರೇನು? ಸರ್ಪನಿರ್ಪುದು ಒಂದೇ ಸ್ಥಾನ ! ಭಾವ ಭಾವಿಸಿ ಭ್ರಮೆಯಳಿದು ನೋಡಾ: ಆ ಭಾವ ಭಾವಿಸಲು ನಿರ್ಭಾವ, ಕೂಡಲಸಂಗಮದೇವಾ.