ಬಸವಣ್ಣ   
  ವಚನ - 972     
 
ಅಂದಾ ತ್ರಿಪುರವನುರುಹಿದಾತ ವೀರ, ಅಂದಾ ದಕ್ಷನ ಯಾಗವ ಕೆಡಿಸಿದಾತ ವೀರ, ಕಡುಗಲಿ ನರಸಿಂಹನನುಗಿದಾತ ವೀರ, ನಮ್ಮ ಹರನ ಲಲಾಟದಲ್ಲಿ ಜನಿಸಿದಾತ ವೀರ, ನಮ್ಮ ಕೂಡಲಸಂಗನಲ್ಲಿ ಮಡಿವಾಳ ವೀರ.