ಬಸವಣ್ಣ   
  ವಚನ - 980     
 
ಅನ್ಯದೈವವ ಬಿಟ್ಟುದಕಾವುದು ಕ್ರಮವೆಂದಡೆ; ಅನ್ಯದೈವದ ಮಾತನಾಡಲಾಗದು, ಅನ್ಯದೈವದ ಪೂಜೆಯ ನೋಡಲಾಗದು, ಸ್ಥಾವರಲಿಂಗಕ್ಕೆರಗಲಾಗದು, ಆ ಲಿಂಗದ ಪ್ರಸಾದವ ಕೊಳಲಾಗದು, ಇಷ್ಟು ನಾಸ್ತಿಯಾದಡೆ ಅನ್ಯದೈವವ ಬಿಟ್ಟು ಭಕ್ತನೆನಿಸುವನು. ಇವರೊಳಗನುಸರಣೆಯ ಮಾಡಿದನಾದಡೆ, ಕುಂಭೀಪಾಕ ನಾಯಕನರಕದಲ್ಲಿಕ್ಕುವ ನಮ್ಮ ಕೂಡಲಸಂಗಮದೇವರು.